ಕೃಷಿಕ ಸಿಂಚನ ಸಾಲ

ನಿಮ್ಮ ಕೊಯ್ಲು ಸಮಯ ಮತ್ತು ಕೃಷಿ ವ್ಯವಹಾರಗಳೊಂದಿಗೆ ಸರಿದೂಗಿಸಲು ಅನುಕೂಲಕರ ಮರುಪಾವತಿಗಳೊಂದಿಗೆ ನಾವು ಮುಖ್ಯ ನೀರಾವರಿ ಮೂಲಸೌಕರ್ಯದಲ್ಲಿ ನಿಮಗೆ ಹೂಡಿಕೆ ಮಾಡಲು ಸಹಾಯ ಮಾಡುತ್ತೇವೆ. ನಿಮ್ಮ ಡೌನ್ ಪೇಮೆಂಟ್ ಮೊತ್ತವನ್ನು ಕೇವಲ 15%ಗೆ ಇಳಿಸುವ ಮೂಲಕ ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ಒದಗಿಸುವ ಮೂಲಕ, ಕೃಷಿ ಸಿಂಚನಾ ಯೋಜನೆಯು ನಿಮ್ಮ ಕೃಷಿ ಪ್ರಯತ್ನಗಳನ್ನು ಸುಸ್ಥಿರ ಮತ್ತು ಫಲಪ್ರದಾಯಕ ಕಾರ್ಯಚರಣೆಗಳನ್ನಾಗಿಸಲು ಬೆಂಬಲ ನೀಡುತ್ತದೆ. ನೀವು ಕೃಷಿಯಲ್ಲಿ ತೊಡಗಿರುವ ವ್ಯಕ್ತಿಯಾಗಿರಲಿ, ಸಂಸ್ಥೆಯಾಗಿರಲಿ ಅಥವಾ ಟ್ರಸ್ಟ್ ಆಗಿರಲಿ, ನಮ್ಮ ಯೋಜನೆಯು ನೀರಿನ ನಿರ್ವಹಣೆಯನ್ನು ಅತ್ಯುತ್ತಮವಾಗಿಸಲು, ಬೆಳೆ ಇಳುವರಿಯನ್ನು ಹೆಚ್ಚಿಸಲು ಮತ್ತು ನಿಮ್ಮ ಕೃಷಿ ಪದ್ಧತಿಗಳ ಸುಸ್ಥಿರತೆಯನ್ನು ಸುಧಾರಿಸಲು ನಿಮಗೆ ಅಗತ್ಯವಿರುವ ಬೆಂಬಲವನ್ನು ಒದಗಿಸುತ್ತದೆ. ಕಡಿಮೆ ಓದಿ ಕೃಷಿ ಕೊಯ್ಲಿನ ಸಮಯ ಮತ್ತು ಕೃಷಿ ವ್ಯವಹಾರಗಳೊಂದಿಗೆ ಸರಿದೂಗಿಸಲು ಅನುಕೂಲಕರ ಮರುಪಾವತಿಗಳೊಂದಿಗೆ ನಾವು ಮುಖ್ಯ ನೀರಾವರಿ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ನಿಮಗೆ ಸಹಾಯ ಮಾಡುತ್ತೇವೆ. ನಿಮ್ಮ ಡೌನ್ ಪೇಮೆಂಟ್ ಮೊತ್ತವನ್ನು ಕೇವಲ 15%ಗೆ ಇಳಿಸುವ ಮೂಲಕ ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ಒದಗಿಸುವ ಮೂಲಕ, ಕೃಷಿ ಸಿಂಚನಾ ಯೋಜನೆಯು ನಿಮ್ಮ ಕೃಷಿ ಪ್ರಯತ್ನಗಳನ್ನು ಸುಸ್ಥಿರ ಮತ್ತು ಫಲಪ್ರದಾಯಕವನ್ನಾಗಿಸುವಲ್ಲಿ ಕಾರಣವಾಗುತ್ತದೆ. ನೀವು ಕೃಷಿಯಲ್ಲಿ ತೊಡಗಿರುವ ವ್ಯಕ್ತಿಯಾಗಿರಲಿ, ಸಂಸ್ಥೆಯಾಗಿರಲಿ ಅಥವಾ ಟ್ರಸ್ಟ್ ಆಗಿರಲಿ, ನಮ್ಮ ಯೋಜನೆಯು ನೀರಿನ ನಿರ್ವಹಣೆಯನ್ನು ಅತ್ಯುತ್ತಮವಾಗಿಸಲು, ಬೆಳೆ ಇಳುವರಿಯನ್ನು ಹೆಚ್ಚಿಸಲು ಮತ್ತು ನಿಮ್ಮ ಕೃಷಿ ಪದ್ಧತಿಗಳ ಸುಸ್ಥಿರತೆಯನ್ನು ಸುಧಾರಿಸಲು ನಿಮಗೆ ಅಗತ್ಯವಿರುವ ಬೆಂಬಲವನ್ನು ಒದಗಿಸುತ್ತದೆ. Read more

ನಿಮಗೇಕೆ ಈ ಸಾಲ ಸೂಕ್ತ

ಸರಳ ಪರಿಹಾರಗಳೊಂದಿಗೆ ನಿಮ್ಮ ಕೃಷಿ ಅಗತ್ಯತೆಗಳಿಗೆ ಬೆಂಬಲ

ಬೆಳೆ ಚಕ್ರಗಳೊಂದಿಗೆ ಸಮನಾಗಿಸುವ ಮರುಪಾವತಿ ನಿಯಮಗಳ ಜೊತೆಗೆ EBLR ಪ್ರಕಾರದ ದರಗಳು

ನಮ್ಮೊಂದಿಗೆ ನಿಮಗಾಗಿ ಮಾರ್ಗದರ್ಶನ ಮತ್ತು ಸಹಾಯ

ನಿಮ್ಮ ನೀರಾವರಿ ಅಗತ್ಯಗಳು ಮತ್ತು ಆಧುನಿಕ ಕೃಷಿ ವ್ಯಾಪಾರಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ

ಡೌನ್ ಪೇಮೆಂಟ್ ಮೊತ್ತ

ನಿಮ್ಮ ಕೊಡುಗೆಯಾಗಿ ಯೋಜನೆಯ ವೆಚ್ಚದ ಶೇಕಡಾ 15%ವರೆಗಿನ ಹಣವನ್ನು ಪಾವತಿಸಬೇಕು.    

ಸಾಲದ ಮರುಪಾವತಿ

ನಿಮ್ಮ ಬೆಳೆಯ ಚಕ್ರಗಳು ಮತ್ತು ಕೊಯ್ಲಿನ ಸಮಯದೊಂದಿಗೆ ಹೊಂದಿಕೊಳ್ಳುವ ವಾರ್ಷಿಕ ಕಂತುಗಳಲ್ಲಿ ನೀವು ಸಾಲ ಮರುಪಾವತಿಸಬಹುದು.

ಬಡ್ಡಿ ದರಗಳು

ನಿಮ್ಮ ಪಾವತಿಗಳು ಅಗ್ಗವಾಗಿದೆ ಮತ್ತು ಇಂದಿನ ಮಾರುಕಟ್ಟೆ ಸ್ಥಿತಿಗತಿಗಳ ಪ್ರಕಾರವಾಗಿದೆ ಎಂದು ಖಾತರಿಪಡಿಸಿಕೊಳ್ಳುವ ಮೂಲಕ ಬಾಹ್ಯ ಮಾನದಂಡ ಸಾಲ ದರ(EBLR) ಮಾರ್ಗಸೂಚಿಗಳೊಂದಿಗೆ ಹೊಂದಿಕೊಳ್ಳುವ ಬಡ್ಡಿ ದರಗಳು

ಸಾಲದ ಮೊತ್ತ

ನಾವು ವಿವಿಧ ನೀರಾವರಿ ಯೋಜನೆಗಳಿಗಾಗಿ ಸಾಲದ ಮೊತ್ತದ ಶೇಕಡಾ 85% ವರೆಗೆ ಹಣಕಾಸು ಒದಗಿಸುತ್ತೇವೆ. ಗರಿಷ್ಟ ₹1 ಕೋಟಿ ಮೊತ್ತದೊಂದಿಗೆ, ನಾವು ನಿಮಗೆ ಸೂಕ್ತ ನೀರಾವರಿ ತಂತ್ರಜ್ಞಾನಗಳನ್ನು ಆಯ್ಕೆ ಮಾಡಲು ಮತ್ತು ಹಣಕಾಸನ್ನು ಹೂಡಿಕೆ ಮಾಡಲು ಮಾರ್ಗದರ್ಶನ ನೀಡುತ್ತೇವೆ.    

ಓವರ್ ಡ್ರಾಫ್ಟ್ ಸೌಲಭ್ಯ

ನಾವು ಒಂದು ವರ್ಷದವರೆಗೆ ಪುನರಾವರ್ತನೆಯಾಗುವ ವೆಚ್ಚಗಳ ಶೇಕಡಾ 75%ವರೆಗೆ ಓವರ್ ಡ್ರಾಫ್ಟ್ ಸೌಲಭ್ಯವನ್ನು ಒದಗಿಸುತ್ತೇವೆ 

ಸ್ವತ್ತುಗಳ ಹೈಪೋಥಿಕೇಷನ್

ಬೆಳೆಗಳ ಹೈಪೋಥಿಕೇಷನ್ ಮತ್ತು ₹1.6 ಲಕ್ಷಗಳವರೆಗಿನ ಸಾಲದ ಮೊತ್ತಗಳಿಗಾಗಿ ಖರೀದಿಸಿದ ಸ್ವತ್ತುಗಳು 

ಆಸ್ತಿಯ ಮೇಲಾಧಾರ

₹1.6 ಲಕ್ಷಕ್ಕಿಂತ ಮೇಲ್ಪಟ್ಟ ಸಾಲದ ಮೊತ್ತಗಳಿಗಾಗಿ ಹೈಪೋಥಿಕೇಷನ್ ಜೊತೆಯಲ್ಲಿ ನಮಗೆ ಮನೆ, ವಾಣಿಜ್ಯ ಅಥವಾ ಕೃಷಿ ಆಸ್ತಿ ಸಹ ಭದ್ರತೆಯಾಗಿ ಬೇಕಾಗುತ್ತದೆ.  

ಸರಳ ಮತ್ತು ಸುಲಭಗೊಳಿಸಿ

ಸ್ಮಾರ್ಟ್ ಉಳಿತಾಯ ಮತ್ತು ವೆಚ್ಚಗಳಿಗಾಗಿ ಸ್ಮಾರ್ಟ್ ಕ್ಯಾಲ್ಕುಲೇಟರ್

ಇ ಎಮ್ ಐ ಕ್ಯಾಲ್ಕುಲೇಟರ್

ಸಾಲದ ಮೊತ್ತ
25000 1000000
ಬಡ್ಡಿ ದರ
2% 18%
ಸಾಲದ ಅವಧಿ
1 ತಿಂಗಳುಗಳು 60 ತಿಂಗಳುಗಳು

ನೀವು ಪಾವತಿಸುವಿರಿ

₹13,800/ತಿಂಗಳುಗಳು

ನಿಮಗಾಗಿ ಯಾವ ಉತ್ಪನ್ನವು ಖಚಿತವಾಗಿಲ್ಲವೇ?

ಒಟ್ಟಿಗೆ ಅತ್ಯುತ್ತಮ ಫಿಟ್ ಅನ್ನು ಕಂಡುಹಿಡಿಯೋಣ

  • ಯಾವುದೇ ಸ್ಪ್ಯಾಮ್ ಕರೆಗಳಿಲ್ಲ
  • ಮೀಸಲಾದ ಕೆಬಿಎಲ್ ತಜ್ಞರು
  • ನಿಮ್ಮ ಸಮಯಕ್ಕೆ ಕರೆಯನ್ನು ಹೊಂದಿಸಿ

ಅರ್ಹತೆ

ವ್ಯಕ್ತಿಗಳು ಮತ್ತು ಸಣ್ಣ ರೈತರು
  •  ನೀರಾವರಿ ಯೋಜನೆಯನ್ನು ಒಳಗೊಂಡ ಕೃಷಿಯಲ್ಲಿ ತೊಡಗಿಕೊಂಡಿರುವ ರೈತರು ಅಥವಾ ವ್ಯಕ್ತಿಗಳು  
  • ಉತ್ತಮ ವ್ಯವಸಾಯ ಅಭ್ಯಾಸಗಳು ಮತ್ತು ಯೋಜನೆಯು ಕಡ್ಡಾಯವಾಗಿದೆ 
  •  ಗುರುತು ಮತ್ತು ವಿಳಾಸವನ್ನು ಒದಗಿಸುವ ಮಾನ್ಯ ದಾಖಲೆಗಳು 
  • ಸಂಸ್ಥೆಗಳು, ಟ್ರಸ್ಟ್ ಗಳು, SDGಗಳು ಮತ್ತು HUFಗಳು 
  • ಮಾನ್ಯವಾದ ಗುರುತಿಸುವಿಕೆ ಮತ್ತು ಕಾನೂನುಬದ್ಧ ಕೃಷಿ ಘಟಕದ ಪುರಾವೆ

ಅಗತ್ಯವಿರುವ ದಾಖಲೆಗಳು

  • CIBIL/CRIF  ಮತ್ತು ಕೆವೈಸಿ ದಾಖಲೆಗಳು
  • ಯೋಜನೆ ಮತ್ತು ಅಂದಾಜು (ಅನ್ವಯವಾಗುತ್ತಿದ್ದಲ್ಲಿ)
  • RTCS
  • CERSAI  (ಅನ್ವಯವಾಗುತ್ತಿದ್ದಲ್ಲಿ)
  • EC ಮತ್ತು  RTC
  • ಆದಾಯ ತೆರಿಗೆ ಪಾವತಿಗಳು, ಆದಾಯ ಪುರಾವೆ
  • ಆಸ್ತಿಯ ಕಾನೂನು ದಾಖಲೆಗಳು
  • ಯೋಜನೆ ವರದಿ
  • ವಿಮೆ ನಕಲು ಪ್ರತಿ ಮತ್ತು ಸ್ಟಾಕ್ ಪ್ರತಿ (ಅನ್ವಯವಾಗುತ್ತಿದ್ದಲ್ಲಿ)

1,2,3...ರೀತಿಯಾಗಿ ಸರಳ

3 ಸರಳ ಹಂತಗಳಲ್ಲಿ ಕೃಷಿಕ್ ಸಿಂಚನಾ ಸಾಲಕ್ಕಾಗಿ ಅರ್ಜಿ ಸಲ್ಲಿಸಿ

ಹಂತ 1

ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ

ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ

ಹಂತ 2

ನಿಮ್ಮ ಮೂಲ ವಿವರಗಳೊಂದಿಗೆ ಪ್ರಾರಂಭಿಸಿ

ನಿಮ್ಮ ಮೂಲ ವಿವರಗಳನ್ನು ಒದಗಿಸಿ ಮತ್ತು ನಿಮ್ಮ ದಾಖಲೆಗಳನ್ನು ಕೈಯಲ್ಲಿಡಿ

ಹಂತ 3

ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ

ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ

sb

ನಿಮಗಾಗಿರುವ ಇತರ ಆಯ್ಕೆಗಳನ್ನು ನೋಡಿ

ಹಣಕಾಸಿನ ಶ್ರೇಷ್ಠತೆಗಾಗಿ ಆರಿಸಲಾಗಿರುವ ಸಾವಿರಾರು ಜನರ ಭರವಸೆ

ಕೆಬಿಎಲ್ ಅಗ್ರಿ ಗೋಲ್ಡ್ ಸಾಲ

  • ₹50 ಲಕ್ಷ ಗರಿಷ್ಟ ಸಾಲದ ಮೊತ್ತ
  • ವಾರ್ಷಿಕ 8% ಬಡ್ಡಿದರಗಳಿಂದ ಆರಂಭ
  • 12 ತಿಂಗಳುಗಳವರೆಗೆ ಸಾಲದ ಅವಧಿ

ಕೆಬಿಎಲ್ ಆಗ್ರೋ ಸಂಸ್ಕರಣಾ ಸಾಲ

  • ₹15 ಕೋಟಿವರೆಗೆ ಗರಿಷ್ಟ ಸಾಲದ ಮೊತ್ತ
  • ವಾರ್ಷಿಕ 11.3% ಬಡ್ಡಿದರಗಳಿಂದ ಆರಂಭ
  • 120 ತಿಂಗಳುಗಳವರೆಗೆ ಸಾಲದ ಅವಧಿ

ಸರಳ ಮಾಹಿತಿಯೊಂದಿಗೆ ಅಗ್ರಿಬ್ಯಾಂಕಿಂಗ್ ಸರಳೀಕೃತಗೊಳಿಸಿ

ಪ್ರತಿ ಕ್ಷಣವೂ ನಿಮಗೆ ಮಾಹಿತಿ ಒದಗಿಸುವ ನಮ್ಮ ಸಂಪನ್ಮೂಲಗಳು

match-made
ಬ್ಯಾಂಕಿಂಗ್ ಸ್ವರ್ಗದಲ್ಲಿ ಮಾಡಿದ ಹೊಂದಾಣಿಕೆ: ಉಳಿತಾಯ ಖಾತೆ ಆವೃತ್ತಿ

navigating-pers
ನಿಮ್ಮ ಆರಂಭಿಕ 20 ರ ದಶಕದಲ್ಲಿ ವೈಯಕ್ತಿಕ ಸಾಲಗಳನ್ನು ನ್ಯಾವಿಗೇಟ್ ಮಾಡುವುದು- ಇದು ಒಳ್ಳೆಯ ಐಡಿಯಾವೇ?

savings-accoun
ಉಳಿತಾಯ ಖಾತೆ: ರೂಢಿಗಳನ್ನು ಮುರಿಯುವುದು ಮತ್ತು ಸಂಪತ್ತನ್ನು ನಿರ್ಮಿಸುವುದು

vehicle-loans
ಮಹತ್ವಾಕಾಂಕ್ಷೆಯ ಡೆಲಿವರಿ ಪಾಲುದಾರರು ಮತ್ತು ಕ್ಯಾಬ್ ಚಾಲಕರಿಗೆ ವಾಹನ ಸಾಲಗಳು

why-should
ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ
ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ

ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ
ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ

the-wisdom
ನಿವೃತ್ತ ಜನರಿಗೆ ತ್ವರಿತ ಚಿನ್ನದ ಸಾಲಗಳ ಬುದ್ಧಿವಂತಿಕೆ - ಆರ್ಥಿಕ ಭದ್ರತೆಯನ್ನು ಅನ್ಲಾಕ್ ಮಾಡಿ

ಪ್ರಶ್ನೆಗಳಿವೆಯೇ? ನಾವು ಉತ್ತರಿಸುತ್ತೇವೆ

ಕೃಷಿಕ ಸಿಂಚನಾ ಸಾಲವು ಯಾವ ರೀತಿಯ ನಿರ್ದಿಷ್ಟ ನೀರಾವರಿ ಯೋಜನೆಗಳಿಗೆ ಹಣದ ಸೌಲಭ್ಯವನ್ನು ಒದಗಿಸುತ್ತದೆ?

ಹೊಸ ನೀರಾವರಿ ವ್ಯವಸ್ಥೆಗಳ ಅಳವಡಿಕೆ, ಪ್ರಸ್ತುತವಿರುವ ವ್ಯವಸ್ಥೆಗಳ ನವೀಕರಣ ಮತ್ತು ಸ್ಪ್ರಿಂಕ್ಲರ್ ಮತ್ತು ಹನಿ ನೀರಾವರಿ ವ್ಯವಸ್ಥೆ ರೀತಿಯ ನೀರಾವರಿ ಉಪಕರಣಗಳನ್ನು ಖರೀದಿಸುವುದೂ ಸೇರಿದಂತೆ ಅನೇಕ ರೀತಿಯ ನೀರಾವರಿ ಸಂಬಂಧಿತ ಯೋಜನೆಗಳಿಗೆ ಹಣಕಾಸನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಸಣ್ಣ ಕೃಷಿ ಭೂಮಿಯಾಗಿರಬಹುದು ಅಥವಾ ದೊಡ್ಡ ಕೃಷಿ ಕಾರ್ಯಾಚರಣೆಯಾಗಿರಬಹುದು, ಈ ಯೋಜನೆಯು ಬೆಳೆ ಇಳುವರಿ ಮತ್ತು ನೀರಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಅಗತ್ಯ ಹಣಕಾಸಿನ ಸಹಾಯವನ್ನು ಒದಗಿಸುತ್ತದೆ.

ಕೃಷಿಕ್ ಸಿಂಚನಾ ಸಾಲದ ಬಡ್ಡಿ ದರಗಳು ಬಾಹ್ಯ ಮಾನದಂಡ ಸಾಲ ದರ(EBLR)ನೊಂದಿಗೆ ಸರಿದೂಗಿಸಬೇಕು, ಇದರೊಂದಿಗೆ ಸ್ಪರ್ಧಾತ್ಮಕ ಮತ್ತು ಕಡಿಮೆ ಬಡ್ಡಿದರಗಳನ್ನು ಸಹ ಖಾತ್ರಿಪಡಿಸಿಕೊಳ್ಳಬೇಕು. ಇದರ ಅರ್ಥ ಬಡ್ಡಿ ದರಗಳು ಮಾರುಕಟ್ಟೆ ಸ್ಥಿತಿಗಳಿಗೆ ಹೊಂದಿಕೊಳ್ಳಬೇಕು, ನಿಮಗೆ ಅನುಕೂಲಕರ ಆರ್ಥಿಕ ಪರಿಸ್ಥಿತಿಗಳಲ್ಲಿ ಕಡಿಮೆ ದರಗಳ ಲಾಭವನ್ನು ಒದಗಿಸಬೇಕು. ಈ ರೀತಿಯಾಗಿರುವ ಮಾದರಿಯು ಕಾಲಕ್ರಮೇಣ ನಿಮ್ಮ ಸಾಲದ ಒಟ್ಟಾರೆ ವೆಚ್ಚಗಳನ್ನು ಕಡಿಮೆ ಮಾಡುವ ಮೂಲಕ ನಿಮ್ಮ ನೀರಾವರಿ ಅಗತ್ಯಗಳಿಗಾಗಿ ಪೂರಕವಾಗುತ್ತದೆ.

ಯೋಜನೆಯ ವೆಚ್ಚ ಅಥವಾ ಉಪಕರಣದ ಭಾಗವಾಗಿ 15% ಡೌನ್ ಪೇಮೆಂಟ್ ನೀವು ಮಾಡಬೇಕಾಗುತ್ತದೆ. ಯೋಜನೆಯಲ್ಲಿ ನಿಮ್ಮ ಭಾಗಧಾರಿತ್ವ ಇರುವ ಕಾರಣ ಅದರ ಯಶಸ್ಸಿಗೆ ನಿಮ್ಮ ಬದ್ಧತೆಯನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಸಾಲದ ಮೊತ್ತವನ್ನು ಕಡಿಮೆ ಮಾಡಿ, ಮರುಪಾವತಿಗಳನ್ನು ಸುಲಭವಾಗಿಸುತ್ತದೆ. ಉದಾಹರಣೆಗೆ: - ₹1,00,000 ಯೋಜನೆಗಾಗಿ ನೀವು ನಿಮ್ಮ ಕಡೆಯಿಂದ ₹15,000 ಗಳನ್ನು ಪಾವತಿಸಬೇಕು.

ಹೈಪೋಥಿಕೇಶನ್ ನಲ್ಲಿ ಸ್ವತ್ತನ್ನು ಸಾಲಕ್ಕಾಗಿ ಗಿರವಿ ಇಟ್ಟರೂ ಅದರ ಸ್ವಾಧೀನತೆ ಮತ್ತು ನಿಯಂತ್ರಣ ನಿಮ್ಮ ಕೈಯ್ಯಲ್ಲಿರುತ್ತದೆ. ಪ್ಲೆಜ್ ಅಥವಾ ಗಿರವಿಯಲ್ಲಿ ಸಾಲ ನೀಡುವರಲ್ಲಿಯೇ ಸ್ವತ್ತಿನ ಸ್ವಾಧೀನ ವಿರುತ್ತದೆ. ಆದರೆ ಹೈಪಾಥಿಕೇಷನ್ ನಲ್ಲಿ ನಿಮಗೆ ಆಸ್ತಿಯನ್ನು ಬಳಸಿಕೊಳ್ಳುತ್ತಾ ಮತ್ತು ಸಾಲಕ್ಕೆ ಭದ್ರತೆಯಾಗಿರಿಸಿಕೊಳ್ಳಲೂ ಸಾಧ್ಯವಾಗಿಸುತ್ತದೆ. ಇದು ಕೃಷಿ ಸಾಲಗಳಲ್ಲಿ, ವಿಶೇಷವಾಗಿ ಬಳಕೆಯಾಗುತ್ತದೆ.

ಹೌದು, ಈ ಸಾಲವು ಕೇವಲ ಹೊಸ ನೀರಾವರಿ ಯೋಜನೆಗಳಿಗಷ್ಟೇ ಅಲ್ಲದೆ ಇದರೊಂದಿಗೆ ಅಸ್ತಿತ್ವದಲ್ಲಿರುವ ನೀರಾವರಿ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ವಿಸ್ತರಣೆಗಾಗಿಯೂ ನೀಡಲಾಗುತ್ತದೆ. ಇದರಲ್ಲಿ ಹಳೆಯ ವ್ಯವಸ್ಥೆಗಳನ್ನು ಬದಲಿಸುವುದು, ನೀರಾವರಿಯ ಸ್ಥಳವನ್ನು ವಿಸ್ತರಿಸುವುದು ಅಥವಾ ಉತ್ತಮ ನೀರಿನ ನಿರ್ವಹಣೆಗಾಗಿ ಹೊಸ ತಂತ್ರಜ್ಞಾನವನ್ನು ಬಳಸುವುದು ಒಳಗೊಂಡಿದೆ.

ಯೋಜನೆಯು ಕೃಷಿ ಆದಾಯದ ಅನುಸರಿಸಿ ಮರುಪಾವತಿ ನಿಯಮಗಳನ್ನು ಅನುಸರಿಸುತ್ತವೆ. ವಾರ್ಷಿಕ ಕಂತುಗಳನ್ನು ನಿಮ್ಮ ಬೆಳೆಗಳ ಕೊಯ್ಲು ಮತ್ತು ಮಾರುಕಟ್ಟೆ ಅವಧಿಗಳಿಗೆ ಹೊಂದಿಕೆಯಾಗುವಂತೆ ನಿಗದಿಪಡಿಸಬಹುದು, ನಗದು ಹರಿವುಗಳನ್ನು ಸುಲಭವಾಗಿ ನಿರ್ವಹಿಸಬಹುದು. ಈ ವಿಧಾನವು ನಿಮ್ಮ ಕೃಷಿ ಉತ್ಪನ್ನಗಳಿಂದ ಆದಾಯ ಬರುವ ಸಮಯಕ್ಕೆ ಸರಿಯಾಗಿ ಮರುಪಾವತಿಯ ಸಮಯ ಬರುವಂತೆ ಮಾಡಬಹುದು.

ಕೃಷಿ ಆಧಾರಿತ ವ್ಯವಹಾರಗಳು ಅನಿರೀಕ್ಷಿತ ಸವಾಲುಗಳನ್ನು ಹೊಂದಿರುತ್ತವೆ ಎಂಬುವ ಸತ್ಯವನ್ನು ಕರ್ಣಾಟಕ ಬ್ಯಾಂಕ್ ಅರ್ಥಮಾಡಿಕೊಂಡಿದೆ. ಒಂದುವೇಳೆ ನೀವು ಸಾಲವನ್ನು ಮರುಪಾವತಿ ಮಾಡಲು ಯಾವುದೇ ಸಮಸ್ಯೆ ಎದುರಿಸಿದಲ್ಲಿ, ನೀವು ತಕ್ಷಣ ನಮ್ಮನ್ನು ಭೇಟಿ ಮಾಡಿ. ನಮ್ಮ ತಂಡವು ನಿಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಅದಕ್ಕಾಗಿ ಸೂಕ್ತ ಸಲಹೆಗಳನ್ನು ನೀಡಲು ತೊಡಗುತ್ತದೆ. ಇದರಲ್ಲಿ ನಿಮ್ಮ ಸಾಲವನ್ನು ಮರುರಚಿಸುವುದು, ಮರುಪಾವತಿ ಸಮಯಗಳನ್ನು ಮತ್ತೊಮ್ಮೆ ಹೊಂದಿಸುವುದು ಅಥವಾ ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ನಿರ್ವಹಿಸುವ ಕುರಿತು ಮಾರ್ಗದರ್ಶನ ನೀಡುವುದು ಕೂಡ ಒಳಗೊಂಡಿರಬಹುದು. ನಮ್ಮ ಗ್ರಾಹಕರ ಕಷ್ಟದ ಸಮಯದಲ್ಲಿ ಅವರಿಗೆ ಸಹಾಯ ಮಾಡಲು ಮತ್ತು ಪರಸ್ಪರ ಸಹಾಯಕವಾಗುವ ಪರಿಹಾರಗಳನ್ನು ನೀಡಲು ಬದ್ಧರಾಗಿದ್ದೇವೆ.

ಬಡ್ಡಿಯನ್ನು ಹೊರತುಪಡಿಸಿ, ನಾವು ಸಾಲದ ಪ್ರಕ್ರಿಯೆ ಮತ್ತು ವಿತರಣೆಗಾಗಿ ಶುಲ್ಕಗಳು ಅಥವಾ ಪ್ರಮಾಣಿತ ಸಂಸ್ಕರಣಾ ಶುಲ್ಕಗಳನ್ನು ವಿಧಿಸುತ್ತೇವೆ.

ವಿತರಣೆ ಸಮಯವು ದಾಖಲಾತಿ ಪ್ರಕ್ರಿಯೆ, ಯೋಜನೆ ಮೌಲ್ಯಮಾಪನ ಮತ್ತು ಅನುಮೋದನೆ ಪ್ರಕ್ರಿಯೆಗಳನ್ನು ಆಧರಿಸಿರುತ್ತದೆ. ಆದಾಗಿಯೂ, ಕರ್ನಾಟಕ ಬ್ಯಾಂಕ್ ಕೃಷಿ ಯೋಜನೆಗಳ ಸಮಯ ಸೂಕ್ಷ್ಮತೆಯನ್ನು ಅರ್ಥಮಾಡಿಕೊಂಡು ತ್ವರಿತ ಮತ್ತು ಪರಿಣಾಮಕಾರಿ ಪ್ರಕ್ರಿಯೆಯನ್ನು ಖಾತ್ರಿಪಡಿಸುತ್ತದೆ.

ಕರ್ನಾಟಕ ಬ್ಯಾಂಕಿನ ಸಾಲಗಳ ವಿಷಯದಲ್ಲಿ, EBLR ಅಥವಾ ಬಾಹ್ಯ ಮಾನದಂಡ ಸಾಲ ದರಗಳು ಒಂದು ನಿರ್ಣಾಯಕ ಉಲ್ಲೇಖ ದರವಾಗಿದೆ. ಈ ಮಾನದಂಡಕ್ಕೆ ಸಾಲಗಳ ಬಡ್ಡಿ ದರಗಳನ್ನು ಅಳೆಯಲಾಗುತ್ತದೆ ಮತ್ತು ಹೊಂದಿಸಲಾಗುತ್ತದೆ. ಈ ದರವನ್ನು ಬಾಹ್ಯ ಮಾರುಕಟ್ಟೆ ಅಂಶಗಳಿಂದ ನಿರ್ಧರಿಸಲಾಗುತ್ತದೆ ಮತ್ತು ಇದು ಪಾರದರ್ಶಕ ಹಾಗೂ ಕ್ರಿಯಾಶೀಲ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ. EBLR EBLRನೊಂದಿಗೆ ಸಾಲದ ಬಡ್ಡಿ ದರಗಳನ್ನು ಸೇರಿಸುವುದರಿಂದ, ನಾವು ಸಾಲದ ದರಗಳನ್ನು ನ್ಯಾಯೋಚಿತ, ಮಾರುಕಟ್ಟೆ ಸ್ಥಿತಿಗಳಿಗೆ ಪ್ರತಿಕ್ರಿಯಿಸುತ್ತದೆ ಮತ್ತು ನಿಯಂತ್ರಕ ಮಾರ್ಗಸೂಚಿಗಳ ಪ್ರಕಾರವಾಗಿದೆ ಎಂದು ಖಾತ್ರಿಪಡಿಸಿಕೊಳ್ಳುವ ಮೂಲಕ ನಾವು ಸಾಲಗಾರರಿಗೆ ತಮ್ಮ ಸಾಲದ ಬಡ್ಡಿದರಗಳನ್ನು ಹೇಗೆ ಹೊಂದಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸ್ಪಷ್ಟ ಮತ್ತು ಸ್ಥಿರವಾದ ಆಧಾರವನ್ನು ಒದಗಿಸುತ್ತೇವೆ.

ಕೃಷಿಕ್ ಸಿಂಚನ ಸಾಲದಿಂದ ಸಮರ್ಥ ನೀರಾವರಿ ಯೋಜನೆಗಳನ್ನು ಉತ್ತೇಜಿಸುವುದು

ಕೃಷಿಕ್ ಸಿಂಚನಾ ಸಾಲದೊಂದಿಗೆ ನಾವು ನೀರಾವರಿಗಾಗಿ ಕೃಷಿ ಸಾಲವನ್ನು ಒದಗಿಸುವ ಮೂಲಕ ಹನಿ ನೀರಾವರಿಯಂತಹ ಸುಸ್ಥಿರ ಮತ್ತು ಸಮರ್ಥ ನಿರ್ವಹಣಾ ವ್ಯವಸ್ಥೆಗಳ ಅಳವಡಿಕೆಯನ್ನು ಪ್ರೋತ್ಸಾಹಿಸುತ್ತದೆ.  ರೈತರು ಆಧುನಿಕ ವಿಧಾನಗಳನ್ನು ಬಳಸಿಕೊಳ್ಳಲು, ನೀರು ವ್ಯರ್ಥವಾಗುವುದನ್ನು ಕಡಿಮೆ ಮಾಡಲು ಮತ್ತು ಬೆಳೆ ಇಳುವರಿಗಳನ್ನು ಸುಧಾರಿಸಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.  

ಕೃಷಿ -ವ್ಯವಹಾರ ಸಾಲಗಳ ಮೇಲೆ ಬಡ್ಡಿ ದರಗಳನ್ನು ಸಾಮಾನ್ಯವಾಗಿ ಕೃಷಿ ಸಮುದಾಯವನ್ನು ಬೆಂಬಲಿಸಲು ವಿಶಿಷ್ಟವಾಗಿ ರೂಪಿಸಲಾಗಿದೆ. ಇದರಿಂದ ಇದು ಇತರೆ ಸಾಮಾನ್ಯ ವಾಣಿಜ್ಯ ಸಾಲಗಳಿಗೆ ಹೋಲಿಸಿದರೆ ಬಹಳ ಅನುಕೂಲಕರವಾಗಿರುತ್ತದೆ. ನೀವು ನಿಮ್ಮ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸುವಾಗ ಈ ದರಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಏಕೆಂದರೆ ಇದು ನೇರವಾಗಿ ನಿಮ್ಮ ಮರುಪಾವತಿ ನಿಯಮಗಳು ಮತ್ತು ಸಾಲದ ಒಟ್ಟಾರೆ ವೆಚ್ಚಗಳ ಮೇಲೆ ಪರಿಣಾಮ ಬೀರುತ್ತದೆ.  

ಸಾಲದ ಬಳಕೆ ಮತ್ತು ಮರುಪಾವತಿಯ ಕುರಿತು ನೀವು ಸ್ಪಷ್ಟ ಯೋಜನೆಯನ್ನು ಹೊಂದಿರುವಿರಿ ಎಂದು ಖಚಿತಪಡಿಸಿಕೊಳ್ಳಿ. ಆನ್ಲೈನ್ ಅರ್ಜಿ  ಸಲ್ಲಿಸಲು ಎಲ್ಲಾ ಅಗತ್ಯ ದಾಖಲೆಗಳನ್ನು ತಯಾರಿಟ್ಟುಕೊಳ್ಳಿ. ಕೃಷಿ-ವ್ಯವಹಾರ ಸಾಲಗಳಿಗಾಗಿ ಲಭ್ಯವಿರುವ ಸರ್ಕಾರೀ ಸಬ್ಸಿಡಿಗಳು ಅಥವಾ ವಿಶೇಷ ಕಾರ್ಯಕ್ರಮಗಳನ್ನು ನಿರ್ಲಕ್ಷಿಸದಿರಿ. ನಿಮ್ಮ ಆರ್ಥಿಕ ಸ್ಥಿತಿಯನ್ನು ನಿರ್ವಹಿಸಲು ನಿಮ್ಮ ಸಾಲವನ್ನು ನಿಯಮಿತವಾಗಿ ನಿಗಾವಣೆ ಮತ್ತು ನಿರ್ವಹಣೆ ಮಾಡಿ.